Girish karnad kavyanama
Girish karnad biography in kannada on stone age!
ಕನ್ನಡ ನುಡಿ
ಜ್ಞಾನಪೀಠ ಪ್ರಶಸ್ತಿ ಪಡೆದ ಏಳನೇಯ ಕನ್ನಡಿಗರಾದ ಗಿರೀಶ್ ಕಾರ್ನಾಡರು, ಕನ್ನಡದ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬರು. ಬಹುಮುಖ ಪ್ರತಿಭೆಯ ಗಿರೀಶ್ ಕಾರ್ನಾಡರು ಕನ್ನಡದಲ್ಲಿ ಹೊಸ ಅಲೆಯ ನಾಟಕಗಳನ್ನು ರಚಿಸಿ, ರಂಗಪ್ರಯೋಗ ಮಾಡಿದ್ದಲ್ಲದೆ, ನಾಟಕ ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಅನೇಕ ಕಲಾತ್ಮಕ ಚಿತ್ರಗಳಲ್ಲಿ ಅಭಿನಯ, ಚಿತ್ರಕಥೆ, ಸಂಭಾಷಣೆ ನೀಡಿ ಅನೇಕ ಪ್ರಶಸ್ತಿ ಗೌರವಗಳಿಗೆ ಭಾಜನದಾಗಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಲ್ಲದೆ ನಿರ್ದೇಶನ ಕೂಡ ಮಾದಿದ್ದಾರೆ. ದೂರದರ್ಶನದ ಧಾರಾವಾಹಿಗಳಲ್ಲಿ ಅಭಿನಯಿಸಿ, ನಿರ್ದೇಶಿಸಿ ಜನಪ್ರಿಯತೆ ಗಳಿಸಿದ್ದಾರೆ.
ಕಾರ್ನಾಡ್ರವರು ಈವರೆಗೆ ವಿವಿಧ ಭಾಷೆಗಳಲ್ಲಿ ಸುಮಾರು ೯೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಕನ್ನಡ ನಾಟಕಗಳಲ್ಲಿ ಅತಿ ಹೆಚ್ಚು ಭಾಷೆಗಳಿಗೆ ಅನುವಾದಗೊಂಡು ರಂಗ ಪ್ರಯೋಗ ಕಂಡ ನಾಟಕಗಳು ಗಿರೀಶ್ ಕಾರ್ನಾಡ್ರದ್ದೇ ಆಗಿವೆ.
'ಆಡಾಡತ ಆಯುಷ್ಯ' (೨೦೧೧) ಗಿರೀಶ್ ಕಾರ್ನಾಡರ ಆತ್ಮಕಥೆ.
ಸಂಕ್ಷಿಪ್ತ ಪರಿಚಯ
| ನಿಜನಾಮ | ಗಿರೀಶ್ ರಘುನಾಥ್ ಕಾರ್ನಾಡ್ |
| ಜನನ | ೧೯೩೮ ಮೇ ೧೯ |
| ಮರಣ | ೨೦೧೯ ಜೂನ್ ೧೦ |
| ತಂದೆ | ಡಾ|| ರಘುನಾಥ್ ಕಾರ್ನಾಡ್ |
| ತಾಯಿ | ಕೃಷ್ಣಾಬಾಯಿ |
| ಜನ್ಮ ಸ್ಥಳ | ಮ್ಯಾಥೇರಾನ್ (ಮುಂಬಯಿ ಪ್ರಾಂತ, ಈಗಿನ ಮಹಾರಾಷ್ಟ್ರ) |
| ಪತ್ನಿ | ಡಾ|| ಸರಸ್ವತಿ ಗಣಪತಿ |